ಮುಚ್ಚಿ

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ

ಇಲಾಖೆಯ ಬಗ್ಗೆ

1960 ನೇ ಸಾಲಿನಲ್ಲಿ ಸ್ಥಾಪನೆಯಾದ ಕಾಲೇಜು ಶಿಕ್ಷಣ ಇಲಾಖೆಯು ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ  ಉನ್ನತ ಶಿಕ್ಷಣವನ್ನು ತಲುಪಿಸುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರಥಮ ಆದ್ಯತೆಯಾಗಿ ಹೊಂದಿರುವ ಕಾಲೇಜು  ಶಿಕ್ಷಣ  ಇಲಾಖೆ, ವಿಶೇಷವಾಗಿ ಅತಿ ಹಿಂದುಳಿದ ವರ್ಗ,  ಮಹಿಳೆಯರು  ಮತ್ತು ಗ್ರಾಮೀಣ ಭಾಗದ ಯುವಜನತೆಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಲಭ್ಯವಾಗುವಂತೆ ಕ್ರಮ ವಹಿಸುವಲ್ಲಿ ಕಾರ್ಯಪ್ರವೃತ್ತವಾಗಿರುತ್ತದೆ.

ಪ್ರಸ್ತುತ ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದಲ್ಲಿರುವ  355 ಸಹಶಿಕ್ಷಣ ಕಾಲೇಜುಗಳು, 53 ಮಹಿಳಾ ಕಾಲೇಜುಗಳು,  06 ಕಾನೂನು ಕಾಲೇಜುಗಳು, 14 ವಸತಿಯುಕ್ತ ಕಾಲೇಜುಗಳು, 02 ಮಾದರಿ ಕಾಲೇಜುಗಳನ್ನು ಮತ್ತು 02 ಚಿತ್ರಕಲಾ ಕಾಲೇಜುಗಳನ್ನು ಒಳಗೊಂಡಂತೆ ಒಟ್ಟು  430  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 321 ಅನುದಾನಿತ ಕಾಲೇಜುಗಳ ಆಡಳಿತ, ಅನುದಾನ ಮಂಜೂರಾತಿ, ಯೋಜನಾ ಕಾರ್ಯಗಳನ್ನು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಕಲ್ಬುರ್ಗಿಗಳಲ್ಲಿರುವ 06 ಪ್ರಾದೇಶಿಕ ಕಛೇರಿಗಳ ಸಹಾಯದಿಂದ ನಿರ್ವಹಿಸುತ್ತದೆ.

ಸ್ವಾತಂತ್ರ್ಯೋತ್ತರ ಕಾಲದ ಖ್ಯಾತ ಶಿಕ್ಷಣ ತಜ್ಞರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶ್ರೀ ಲಕ್ಷ್ಮೀನಾರಾಯಣ ಮೊದಲಿಯಾರ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಗಳ ಶಿಫಾರಸ್ಸಿನೊಂದಿಗೆ ಕಾಲೇಜು ಶಿಕ್ಷಣ ಇಲಾಖೆ   ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಹ. ಕೇವಲ 44 ಕಾಲೇಜುಗಳೊಂದಿಗೆ ಪ್ರಾರಂಭಗೊಂಡ ಇಲಾಖೆಯು ಪ್ರಸ್ತುತ ಬೃಹತ್ತಾಗಿ ವಿಸ್ತರಿಸಿರುವುದೂ ಪ್ರಶಂಸಾರ್ಹವಾಗಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಇಲಾಖೆಯು ಬಹಳ ಶ್ರಮಿಸಿದೆ.

ತಾಂತ್ರಿಕ ಶಿಕ್ಷಣ : ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು.  ಅವುಗಳನ್ನು “ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್” ಗಳೆಂದು ಕರೆಯಲಾಗುತಿತ್ತು. ನಂತರ ಇದನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ “ಪಾಲಿಟೆಕ್ನಿಕ್ ” ಗಳೆಂದು ಮರು ನಾಮಕರಣ ಮಾಡಿಲಾಯಿತು. ಆಗ ಸಂಸ್ಥೆಗಳು “ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ ” ನ ಅಧೀನದಲ್ಲಿದ್ದವು. ತದನಂತರ ಪಾಲಿಟೆಕ್ನಿಕ್ ಸಂಸ್ಥೆಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ “ತಾಂತ್ರಿಕ ಶಿಕ್ಷಣ ಇಲಾಖೆ” ಅಸ್ತಿತ್ವಕ್ಕೆ ಬಂದಿತು.

ಇಲಾಖೆಯ ಚಟುವಟಿಕೆಗಳು

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ವಹಣೆ.
  • ಆವಶ್ಯಕತೆಯನ್ನು ಆಧರಿಸಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸುವುದು.
  • ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ವಿತರಿಸುವುದು.
  • ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸರ್ಕಾರಿ ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
  • ಪದವಿ ಕಾಲೇಜುಗಳಿಗೆ ಹೊಸ ಕೋರ್ಸ್ ಮತ್ತು ಹೊಸ ವಿಷಯಗಳ ಪರಿಚಯಿಸಲು ಅನುಮತಿ ನೀಡುವುದು.
  • ಶೈಕ್ಷಣಿಕ ಮತ್ತು ಭೌತಿಕ ಸಂಪನ್ಮೂಲಗಳನ್ನು ಸೃಷ್ಟಿಸಲು ರೂಸಾ ಯೋಜನೆಯ ಅನುಷ್ಠಾನ.
  • ರಾಜ್ಯದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವುದು.
  • ನ್ಯಾಕ್‌ನಿಂದ ಮಾನ್ಯತೆ ಪಡೆಯಲು ಪದವಿ ಕಾಲೇಜುಗಳನ್ನು ಸಿದ್ಧಗೊಳಿಸುವುದು.
  • ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಪದವಿ ಕಾಲೇಜುಗಳಲ್ಲಿ ಬೋಧನೆ ಮತ್ತು ಆಡಳಿತ ಪ್ರಕ್ರಿಯೆಯನ್ನು ಗಣಕೀಕೃತಗೊಳಿಸುವುದು.
  • ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವಾವಿಷಯಗಳ ನಿರ್ವಹಣೆ.
  • ಮೈತ್ರಿ ವಿದ್ಯಾರ್ಥಿ ಸಹಾಯವಾಣಿಯ ನಿರ್ವಹಣೆ.
  • 30 ಜಿಲ್ಲಾಕೇಂದ್ರಗಳಲ್ಲಿ ಸ್ಥಾಪನೆಗೊಂಡಿರುವ ‘ಯುವಸಬಲೀಕರಣ ಕೇಂದ್ರಗಳ’ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದು.
  • ವಿಜಯೀ ಭವ’ ಯೂಟ್ಯೂಬ್ ಚಾನೆಲ್‍ಗಾಗಿ ಕಾರ್ಯಕ್ರಮಗಳ ನಿರ್ಮಾಣ ಮತ್ತು ಅಪ್‍ಲೋಡ್.
  • ಮಹಿಳಾ ಕಾಲೇಜು ಮತ್ತು ವಸತಿಕಾಲೇಜುಗಳ ಸ್ಥಾಪನೆ.
  • ವಿದ್ಯಾರ್ಥಿ ವಸತಿ ನಿಲಯಗಳ ನಿರ್ವಹಣೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಮೈತ್ರಿ ಸಹಾಯವಾಣಿ
  • ಯುವ ಸಬಲೀಕರಣ ಕೇಂದ್ರ
  • ಉದ್ಯೋಗ ಮಾಹಿತಿ ಕೇಂದ್ರ
  • ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ (ರೂಸಾ)
  • ವಿದ್ಯಾ‍ರ್ಥಿವೇತನಗಳು
  • ರಾಜ್ಯ ಗುಣಮಟ್ಟ ಭರವಸೆ ಕೋಸ
  • ಟೆಲಿ ಶಿಕ್ಷಣ ಹಾಗೂ ಎಡುಸ್ಯಾಟ್

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

      https:/dce.karnataka.gov.in/